ಲಾಕ್ ಡೌನ್ ಹೊರತಾಗಿಯೂ ಇಂದು 44,438 ಕೋವಿಡ್-19 ಹೊಸ ಪ್ರಕರಣ, ಬೆಂಗಳೂರಿನಲ್ಲಿ 19,353 | ಜನತಾ ನ್ಯೂಸ್
ಬೆಂಗಳೂರು : ಜನತಾ ಕರ್ಪ್ಯೂ ಹೊರತಾಗಿಯೂ ರಾಜ್ಯಾದ್ಯಂತ ಇಂದು ಕೋವಿಡ್-19 ಪ್ರಕರಣಗಳು ರಾಜಾರೋಷದಲ್ಲಿ ಅಪಾಯಕರ ರೀತಿಯಲ್ಲಿ ಏರಿಕೆ ಕಾಣುತ್ತಿದ್ದು ಅರ್ಧ ಲಕ್ಷದ ಸಮೀಪ ತಲುಪಿದ್ದು, 44,438 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ. ಇದರಲ್ಲಿ ಹೆಚ್ಚಿನ ಪಾಲು ಹೊಂದಿರುವ ರಾಜಧಾನಿ ಬೆಂಗಳೂರು ನಗರದಲ್ಲಿ ಪ್ರಕರಣಗಳ ಸಂಖ್ಯೆ 22,112 ಸಂಖ್ಯೆ ದಾಖಲಾಗಿದೆ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 815 ಪಾಸಿಟಿವ್ ಪ್ರಕರಣ ದಾಖಲಾಗಿದೆ.
ಹಾಗೆಯೆ, ಪ್ರಕರಣಗಳ ಸಂಖ್ಯೆ ಶತಕ ದಾಟಿದ ಜಿಲ್ಲೆಗಳೆಂದರೆ ಕುಲಬುರಗಿಯಲ್ಲಿ 1083, ಮೈಸೂರು ನಲ್ಲಿ 2685, ಬೀದರ್ ನಲ್ಲಿ 396, ದಕ್ಷಿಣ ಕನ್ನಡದಲ್ಲಿ 793, ಹಾಸನದಲ್ಲಿ 1673, ತುಮಕೂರುನಲ್ಲಿ 2361, ಬಳ್ಳಾರಿ 990, ಮಂಡ್ಯದಲ್ಲಿ 1367, ಧಾರವಾಡದಲ್ಲಿ 1021, ವಿಜಯಪುರದಲ್ಲಿ 274, ಶಿವಮೊಗ್ಗದಲ್ಲಿ 584, ಬೆಳಗಾವಿಯಲ್ಲಿ 559, ಚಿಕ್ಕಬಳ್ಳಾಪುರದಲ್ಲಿ 886, ದಾವಣಗೆರೆಯಲ್ಲಿ 104, ಕೋಲಾರದಲ್ಲಿ 656, ಚಾಮರಾಜನಗರದಲ್ಲಿ 724, ಕೊಡಗುನಲ್ಲಿ 628, ಕೊಪ್ಪಳದಲ್ಲಿ 617, ಉಡುಪಿಯಲ್ಲಿ 529, ರಾಮನಗರದಲ್ಲಿ 492 ಹಾಗೂ ಉತ್ತರ ಕನ್ನಡ 776 ಪ್ರಕರಣ ದಾಖಲಾಗಿದೆ.
ಈ ಮೂಲಕ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 16,46,303ಕ್ಕೆ ಏರಿಕೆಯಾಗಿವೆ. ಕಳೆದ 24 ಗಂಟೆಯಲ್ಲಿ 239 ಮಂದಿ ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ, ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಕೋವಿಡ್-19 ಚೇತರಿಕೆ ಪ್ರಕರಣಗಳಲ್ಲಿ, ಬೆಂಗಳೂರು ನಗರದಲ್ಲಿ 8,847 ಜನ ಕೋವಿಡ್-19 ನಿಂದ ಗುಣಮುಖರಾಗಿದ್ದು ಸೇರಿದಂತೆ ರಾಜ್ಯಾಧ್ಯಂತ ಇಂದು 20,901 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟು 11,85,299 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಕೋವಿಡ್ ಸೋಂಕಿನಿಂದ ರಾಜ್ಯಾದ್ಯಂತ ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದ್ದು ದಾಖಲಾದ 239 ಸಾವುಗಳಲ್ಲಿ, ಬೆಂಗಳೂರು ನಗರದಲ್ಲಿ 115 ಸಾವು ಸಂಭವಿಸಿದೆ ಹಾಗೂ ರಾಜ್ಯಾದ್ಯಂತ ಒಟ್ಟು ಕೋವಿಡ್ ಸಾವಿನ ಸಂಖ್ಯೆ 16,250 ಆಗಿದೆ.ರಾಜ್ಯಾದ್ಯಂತ 271 ಸಾವು : ಹೊಸ ಕೋವಿಡ್-19 ಪ್ರಕರಣ 40,990 ಬೆಂಗಳೂರಿನಲ್ಲಿ 19,353